ಬಿಸಿಗಾಳಿಯ ಸೆಕೆಯಲ್ಲಿ
ಬೆಂಕಿ ಉಗುಳುವ ಸೂರ್ಯನಡಿ
ಬೆವರು ಸುರಿಸಿ ನಿಂತಿರುವ ನಮ್ಮ ರೈತ
ಬೀಜವನ್ನು ಬಿತ್ತುತ್ತ
ಭೂಮಿಯನ್ನು ಉಳುತ್ತ
ಕಾಯಕವೇ ಕೈಲಾಸ ಎಂದ ನಮ್ಮ ರೈತ
ನೋವನ್ನೇ ಉಣ್ಣುತ್ತ
ನಮಗೆ ಅನ್ನ ನೀಡುತ್ತ
ಕರ್ಮಯೋಗಿಯೇ ಆದ ನಮ್ಮ ರೈತ
ಸಾಲ ಶೂಲದೊಳಗೆ ಸಿಲುಕಿ
ಸಹಾಯ ಸಿಗದೇ ಮನವು ಕಲುಕಿ
ಆತ್ಮಹತ್ಯೆಗೆ ಶರಣಾದ ನಮ್ಮ ರೈತ
- ಕೆಕೆ (ಕೀರ್ತನ್ ಕೆ)